ನಮ್ಮ ದೇಶದ ಚಿಕಿತ್ಸಾ ಪದ್ಧತಿಯು ಬಹಳ ಪುರಾತನವೂ ವೈಜ್ಞಾನಿಕವೂ ಆಗಿರುತ್ತದೆ. ಎಲ್ಲರೂ ಚಿಂತನೆ ಮಾಡಬೇಕಾದ ವಿಚಾರ ವಿರುತ್ತದೆ.
ನಮ್ಮ ದೇಶದ ಪುರಾತನ ಚಿಕಿತ್ಸಾ ಪದ್ಧತಿಯು ಆಯುರ್ವೇದ ವಾಗಿದ್ದು ಬಹಳ ಉನ್ನತ ಮಟ್ಟದ ಚಿಕಿತ್ಸೆಯೂ ವರ್ಣಿತವಾಗಿದೆ. ಚಿಕಿತ್ಸೆಯನ್ನು ಓದಿ ತಿಳಿಯುವುದು, ಬಹಳ ಬಹಳ ವಿದ್ದು,ಇದನ್ನು ಸುಲಭವಾಗಿ ಸಾವಿರಾರು ವರ್ಷದ ಜ್ಞಾನವನ್ನು ಗುರುಮುಖೇನ ಒಬ್ಬರಿಂದ ಒಬ್ಬರಿಗೆ ಸುಲಭದ ರೀತಿಯಲ್ಲಿ ಅರಿವಾಗಲು ಗುರು-ಶಿಷ್ಯ ಪರಂಪರೆ ಇತ್ತು ,ಇದರಿಂದ ಸುಲಭದ ನೇರ ಅರಿವಾದ ಆಳವಾದ ಜ್ಞಾನವು ಚಿಕಿತ್ಸೆಯಲ್ಲಿ ಬಹಳ ಪ್ರಚಲಿತವಾಗಿತ್ತು ಈಗಿನ ಶಿಕ್ಷಣದಲ್ಲಿ ಕೇವಲ ಐದು ವರ್ಷದಲ್ಲಿ ಅರಿವಾಗುವುದು ಬಹಳ ಕಡಿಮೆ ನೇರ ಅನಂತ ವಿಚಾರವೂ ತಿಳಿಯುವುದು ಬಹಳ ಕಷ್ಟವಾಗಿರುತ್ತದೆ.ಈಗಿನ ಅಲೋಪತಿ ಚಿಕಿತ್ಸೆಯು ಬಹಳ ವೈಜ್ಞಾನಿಕವಾಗಿದ್ದು ದಾದರೂ ವಿಶೇಷವಾಗಿ ಅಧ್ಯಯನ ಮಾಡಿಕೊಳ್ಳುವುದು ಸಾಲದ ಸಮಯವಾಗಿದ್ದು. ಬಹಳ ಅನಂತವಾದ ಆಯುರ್ವೇದ ಉತ್ತಮವಾಗಿದ್ದರೂ ತುರ್ತು ಚಿಕಿತ್ಸೆಗಾಗಿ ಅಲೋಪತಿಯನ್ನೂ ಅಳವಡಿಸಿಕೊಳ್ಳುವುದು ತಪ್ಪೇನಿಲ್ಲ . ಆದ್ದರಿಂದ ನಮ್ಮ ಪುರಾತನ ಚಿಕಿತ್ಸೆಯನ್ನು ಕಡೆಗಣಿಸದೆ ಬಹಳ ಸೂಕ್ಷ್ಮ ವೈಜ್ಞಾನಿಕ ತಳಹದಿಯಲ್ಲಿ ಇರುವುದರಿಂದ ಇದರ ಅರಿವು ಎಲ್ಲರಿಗೂ ಆಗುವುದು ಬಹಳ ಕಷ್ಟವಾಗಿದ್ದು ಎಲ್ಲವನ್ನು ಕೆಮಿಕಲ್ ಕಂಪೋಸಿಶನ್ ಗೆ ಅಳವಡಿಸಿಕೊಂಡು ಚಿಕಿತ್ಸೆ ಮಾಡುವುದು ಸ್ವಲ್ಪ ಕಷ್ಟ ಹಾಗೂ ಸಾವಿರಾರು ವರ್ಷಗಳು ಬೇಕಾಗಿದ್ದು ಚಿಂತನೆ ಮಾಡಬೇಕಾಗಿರುತ್ತದೆ.ಕಳೆದು ಹೋದ ಸಮಯ ಮತ್ತೆ ಬಾರದು ಆದ್ದರಿಂದ ಉತ್ತಮವಾದ ಆಯುರ್ವೇದ ಚಿಕಿತ್ಸೆಯನ್ನು ಎಲ್ಲರೂ ಹೊಂದಲು ಸಾರ್ವಜನಿಕರು ನಿಧಾನವಾಗಿಯಾದರೂ ಚಿಂತನೆ ಮಾಡಬೇಕು. ಇದರಿಂದ ಯಾವುದೇ ತರಹದ ಶರೀರದಲ್ಲಿ ಕೆಡುಕು ಉಂಟಾಗದೆ ರೋಗವನ್ನು ಬೇರು ಸಹಿತ ಕಿತ್ತೊಗೆಯಲು ಅನುಕೂಲವಾಗುತ್ತದೆ. ವ್ಯಾಧಿ ಅಥವಾ ರೋಗವು ವಾಾಸಿಯಾಗಿ ಹೋಗಿದ್ದರೂ ದೋಷಗಳಿಂದ ದಾರಿ ಯಾಗಿ ಮಾಡಲ್ಪಟ್ಟ ದೇಹದಲ್ಲಿ....ಉಳಿದ ಬೆಂಕಿಯ ಕಿಡಿಯಂತೆ...ಅಲ್ಪ ಸ್ವಲ್ಪ ಕಾರಣ ದಿಂದಲೂ ಮರು ಕಳಿಸಿ ಬರುವುದು. ವ್ಯಾಧಿ ಪೂರ್ಣ ಗುಣಪಡಿಸಿಕೊಳ್ಳ ಬೇಕು.
ಸಮಾಲೋಚನೆಗಳಿಗಾಗಿ, ಸಂಪರ್ಕ: +91-9972831762, ಡಾ.ರಾಮಚಂದ್ರ.ಬಿ.ಎಚ್. ಬಿಎಎಂಎಸ್ (ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ), ಬಿಎಎಂಎಸ್ (ತುರ್ತು ಅಲೋಪತಿ ಔಷಧ), ಪಿಜಿಡಿವೈಎಸ್ (ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ). ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ